ವಚನ ವಿಚಾರ – ಹುಡುಕಾಟ

ವಚನ ವಿಚಾರ – ಹುಡುಕಾಟ

ಅರಸಿ ಅರಸಿ ಹಾ ಹಾ ಎನುತಿದ್ದೆನು
ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು
ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು

ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು ಸಾಲುಗಳು ಅಕ್ಕನ ವಚನದಲ್ಲೂ ಬರಬಹುದಾದಂಥವು ಅನ್ನಿಸುತ್ತದೆ. ಗುಹೇಶ್ವರ ಅನ್ನುವುದರ ಬದಲಾಗಿ ಚನ್ನಮಲ್ಲಿಕಾರ್ಜುನ ಎಂದಿದ್ದರೆ ಅವಳ ವಚನವಲ್ಲ ಅನ್ನುವ ಧೈರ್ಯ ಯಾರಿಗೆ ಬಂದೀತು! ಹಾಗೆಂದರೆ ವಚನಗಳನ್ನು ಓದಿ ನಾವು ಕಲ್ಪಿಸಿಕೊಂಡ ಅಲ್ಲಮನ ಮಾತಿನ ರೀತಿಯದಲ್ಲ ಅನ್ನಿಸುತ್ತದೆ ಎಂದಷ್ಟೆ ಅರ್ಥ. ವಚನ ರಚನೆಯಾಗಿ ಮುನ್ನೂರು ವರ್ಷಗಳ ನಂತರದ ಹಸ್ತಪ್ರತಿಗಳಲ್ಲಿ ಸಿಗುವ ವಚನಗಳಲ್ಲಿ ಅಂಕಿತ ಬದಲಾಗಿಲ್ಲವೆಂದು ಹೇಳುವುದು ಹೇಗೆ! ಇದು ಇಂಥವರ ವಚನ ಅನ್ನುವುದು ಒಂದು ರೂಢಿಯಷ್ಟೆ, ಇನ್ನೇನೂ ಅಲ್ಲ. ವಚನಗಳು ಮನುಷ್ಯ ಮನಸ್ಸಿನ ಸಾಧ್ಯತೆಗಳ ಭಾಷಿಕ ರೂಪಗಳು. ಯಾರಾದರೂ ಹೇಳಿರಬೇಕಲ್ಲ ಅನ್ನುವುದಕ್ಕೆ ವಚನಕ್ಕೆ ಒಬ್ಬೊಬ್ಬ ವಚನಕಾರರನ್ನು ಕಲ್ಪಿಸಿಕೊಂಡು ಇವರ, ಅವರ ವಚನ ಎಂದು ವಾಗ್ವಾದ ಮಾಡುತ್ತಾ ವಚನಗಳನ್ನು ಮರೆತಿದ್ದೇವೆ.

ಇರಲಿ. ಮೇಲು ಮೇಲಿನ ತೋರಿಕೆಯನ್ನು ಮರೆತರೂ ಕೊನೆಯ ಸಾಲು ಕೂಡ ಅಕ್ಕ-ಅಲ್ಲಮ ಇವರಿಗೆ ಸಮಾನವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿದೆ. ಕಣ್ಣಮೊದಲಿನಲ್ಲಿ ಇರುವವನ್ನು, (ಮತ್ತೆ ಯಾರು, ನೋಡುತ್ತಿರುವವನೇ ಅಲ್ಲವೆ!) ಹೊರಗೆ ಹುಡುಕಿ, ಹಾಗೆ ಹುಡುಕಿ ದಣಿದೆ ಅನ್ನುತ್ತಿದೆ ಈ ಸಾಲು. ದಣಿದ ಪರಿಯನ್ನು ಮೊದಲೆರಡು ಸಾಲುಗಳು ಹೇಳುತ್ತಿವೆ.

ತಾನು ಹುಡುಕುತ್ತಿರುವುದು ತನ್ನೊಳಗೇ ಇರುವುದನ್ನು ಅನ್ನುವ ನಿಲುವು ಅಕ್ಕನದೂ ಹೌದು. ಆದ್ದರಿಂದಲೇ `ನೀನೇಕೆ ಮುಖದೋರೆ’ ಎಂದು ಅಕ್ಕ ಕೂಡ ಅಲವತ್ತುಕೊಳ್ಳುವುದುಂಟು. ಬರಿಯ ಅಕ್ಕ ಅಲ್ಲಮ ಮಾತ್ರವಲ್ಲ ನಾವು ಕೂಡ ನಮ್ಮೊಳಗೆ ಬಿಂಬಿತವಾದದ್ದನ್ನೆ ಹೊರಗೆ ಕಾಣಲು ಯತ್ನಿಸುತ್ತ ದಣಿಯುವವರಲ್ಲವೇ? ಹಾಗಾಗಿ ಇಂಥ ವಚನಗಳು ನಮ್ಮ ಮಾತುಗಳೂ ಆಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡೊಂಬರಾಟ!
Next post ಅಂಗಳಕ್ಕೊಂದು ಚಿತ್ತಾರ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys